Saturday, January 24, 2026

 ಮಧುಕರ ವೃತ್ತಿ ಎನ್ನದು


ಅದು ಬಲು ಚೆನ್ನದು


ಪಲ್ಲವಿಪದುಮನಾಭನ


ಪಾದಪದುಮ ಮಧುಪವೆಂಬ


ಅನು ಪಲ್ಲವಿಕಾಲಿಗೆ ಗೆಜ್ಜೆ ಕಟ್ಟಿ


ನೀಲ ವರ್ಣನ ಗುಣಆಲಾಪಿಸುತ್ತ


ಬಲು ಓಲಗ ಮಾಡುವಂಥ


೧ರಂಗನಾಥನ ಗುಣ ಹಿಂಗದೆ ಪಾಡುತ್ತ


ಶೃಂಗಾರ ನೋಡುತ್ತಾ ಕಂಗಳಾನಂದವೆಂಬ


೨ಇಂದಿರಾಪತಿ ಪುರಂದರವಿಠಲನಲ್ಲಿ


ಚೆಂದದ ಭಕ್ತಿಯಿಂದಾನಂದವ ಪಡುವಂಥ ೩-- ಪುರಂದರ ದಾಸರು

No comments:

Post a Comment

   ಒಳ್ಳೆ ಒಳ್ಳೆಯವರು ಹಾಳಾಗಿ ಹೋಗುತ್ತ್ ಇದ್ದರೆ  ಬೆಳ್ಳುಳ್ಳಿ ಸಿಪ್ಪೆ ನನ್ನಹಿಡಿ ನನ್ನಹಿಡಿ ಅಂತು